ದೇವಸ್ಥಾನ ಯೋಜನೆ
ಒಂದು ದೇವಸ್ಥಾನ — ಒಂದು ಸಮಗ್ರ ಸಮಾಜಮುಖಿ ಕೇಂದ್ರ
ನಾವು ರೂಪಿಸಿಕೊಳ್ಳುತ್ತಿರುವ ದೇವಸ್ಥಾನದ ಪರಿಕಲ್ಪನೆ ಕೇವಲ ಒಂದು ಕಟ್ಟಡ ನಿರ್ಮಾಣಕ್ಕೆ ಸೀಮಿತವಾಗಿಲ್ಲ.
ಧಾರ್ಮಿಕ ಆಚರಣೆಗಳ ಜೊತೆಗೆ ಶಿಕ್ಷಣ, ಸಂಸ್ಕೃತಿ, ಸಾಮಾಜಿಕ ಸಾಮರಸ್ಯ ಮತ್ತು ಸೇವಾ ಚಟುವಟಿಕೆಗಳನ್ನು ಒಳಗೊಂಡ ಸಮಗ್ರ ದೇವಸ್ಥಾನ ಸಮುಚ್ಚಯ ನಿರ್ಮಿಸುವುದು ಈ ಯೋಜನೆಯ ಉದ್ದೇಶ.
ಯೋಜನೆಯ ಮೂಲ ಪರಿಕಲ್ಪನೆಯಲ್ಲಿ ದೇವಸ್ಥಾನವನ್ನು ಸಮಾಜದ ಐದು ಪ್ರಮುಖ ಆಯಾಮಗಳ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಚಿಂತನೆ ಇದೆ.
ಯೋಜನೆಯ ಪ್ರಮುಖ ಅಂಶಗಳು
• ದೇವಾಲಯ ಮತ್ತು ಆಧ್ಯಾತ್ಮಿಕ ಕೇಂದ್ರ
ನಿತ್ಯ ಪೂಜೆ, ವಿಶೇಷ ಆರಾಧನೆ, ಉತ್ಸವಗಳು, ಭಜನೆ ಮತ್ತು ಸತ್ಸಂಗ.
• ಸಾಂಸ್ಕೃತಿಕ ಕೇಂದ್ರ
ಸಂಗೀತ, ನೃತ್ಯ, ಯಕ್ಷಗಾನ, ನಾಟಕ, ಜಾನಪದ ಕಲೆ ಮತ್ತು ಸ್ಥಳೀಯ ಕಲಾವಿದರಿಗೆ ವೇದಿಕೆ.
• ಶಿಕ್ಷಣ ಕೇಂದ್ರ
ಗ್ರಂಥಾಲಯ, ಮಕ್ಕಳಿಗೆ ಪೂರಕ ಶಿಕ್ಷಣ, ಸಂಸ್ಕಾರ ಶಿಕ್ಷಣ, ಶ್ಲೋಕ ಮತ್ತು ಭಾರತೀಯ ಜ್ಞಾನ ಪರಂಪರೆಯ ಪರಿಚಯ.
• ಸಾಮಾಜಿಕ ಕೇಂದ್ರ
ಸಾಮರಸ್ಯ, ಸಾಮೂಹಿಕ ಕಾರ್ಯಕ್ರಮಗಳು, ಕುಟುಂಬ ಸಲಹೆ ಮತ್ತು ಸಮಾಜಮುಖಿ ಚಟುವಟಿಕೆಗಳು.
• ಸೇವಾ ಕೇಂದ್ರ
ಆರೋಗ್ಯ ಶಿಬಿರ, ಅನ್ನದಾಸೋಹ, ರಕ್ತದಾನ, ವಿಪತ್ತು ಸಂದರ್ಭದಲ್ಲಿ ನೆರವು ಮತ್ತು ಅಗತ್ಯವಿರುವವರಿಗೆ ಸಹಾಯ.
ಈ ಐದು ಆಯಾಮಗಳು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸಿದಾಗ ದೇವಸ್ಥಾನವು ನಿಜವಾದ ಅರ್ಥದಲ್ಲಿ “ಜನೋಪಯೋಗಿ ದೇವಸ್ಥಾನ” ವಾಗಿ ಬೆಳೆಯುತ್ತದೆ.
ಪ್ರಕೃತಿಯೊಂದಿಗೆ ಸಾಮರಸ್ಯ
ನಮ್ಮ ದೇವಸ್ಥಾನವು ಆಧ್ಯಾತ್ಮಿಕತೆಯ ಜೊತೆಗೆ ಪರಿಸರ ಜವಾಬ್ದಾರಿಯನ್ನೂ ಪ್ರತಿಬಿಂಬಿಸಬೇಕು ಎಂಬುದು ಯೋಜನೆಯ ಆಶಯ.
Green Temple ಪರಿಕಲ್ಪನೆಯಡಿ:
- ನೈಸರ್ಗಿಕ ಮತ್ತು ಸ್ಥಳೀಯ ನಿರ್ಮಾಣ ಸಾಮಗ್ರಿಗಳ ಬಳಕೆ
- ನೈಸರ್ಗಿಕ ಗಾಳಿ ಮತ್ತು ಬೆಳಕಿಗೆ ಆದ್ಯತೆ
- ಮಳೆನೀರು ಕೊಯ್ಲು
- ಸೌರಶಕ್ತಿ ಬಳಕೆ
- ತ್ಯಾಜ್ಯ ನಿರ್ವಹಣೆ
- ಹೂವಿನ ತ್ಯಾಜ್ಯದಿಂದ ಸಾವಯವ ಗೊಬ್ಬರ/ಉಪಯುಕ್ತ ಉತ್ಪನ್ನಗಳ ತಯಾರಿ
- ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಕ್ರಮಗಳು
ಇವುಗಳ ಮೂಲಕ ದೇವಸ್ಥಾನವನ್ನು ಪರಿಸರ ಸ್ನೇಹಿ ಮತ್ತು ಸ್ವಾವಲಂಬಿ ಕೇಂದ್ರವಾಗಿ ರೂಪಿಸುವ ಚಿಂತನೆ ಇದೆ.
